ಚೈತ್ರ ಸಂಭ್ರಮ
ಚೈತ್ರಚೆಲುವ ಯುಗದ ಆದಿ ಬಂದಿದೇ ,
ಶುಭಮುನ್ನುಡಿ ಹೊಸ್ತಿಲಲಿ ಬರೆದಿದೆ ....
ಹೊಂಗೆಯಲ್ಲಿ ಹೂವಮಾಲೆ ಇಳಿಸಿದೇ
ಭೃಂಗ ಸಂಗಕೆಳಸುವಂತೆ ಕೆಣಕಿದೇ
ಕೋಗಿಲೆಗೆ 'ಕುಹೂ 'ದನಿ ನೀಡಿದೆ ........
ಬಾಗಿಲಿಗೆ ತಳಿತೋರಣ ಕಟ್ಟಿದೇ
ಬಾಗಿಲಿಗೆ ತಳಿತೋರಣ ಕಟ್ಟಿದೇ
ಎದೆಗುಡಿಸಿ ರಂಗವಲ್ಲಿ ಬರೆದಿದೇ
'ಪ್ರೀತಿ ಬಿತ್ತಿ ಪ್ರೀತಿ ಬೆಳೆಸು' ಗುನುಗಿದೇ
ಎದೆಯಲಿರಲಿ ಮನುಜತನ ಎಂದಿದೆ .......
ಹಳತನೆಲ್ಲ ಮರೆಯಬೇಕು ಪಿಸುಗಿದೇ
ಹೊಸಸಂಭ್ರಮ ಹೊಸೆಯಿರೆಂದು ಕರೆದಿದೇ
'ಸಿಹಿ-ಕಹಿ ಸಮಚಿತ್ತ ತತ್ವ' ಸಾರಿದೇ
ವರುಷವರುಷ ಬೆಳೆಯಿರೆಂದು ಹರಸಿದೆ .......
ನನ್ನೀ ಕವಿತೆಯೊಂದಿಗೆ ಎಲ್ಲರಿಗೂ ಹಬ್ಬದ ಶುಭ ಹಾರೈಸುತ್ತ ಬ್ಲಾಗ್ ನಲ್ಲಿ ಮುಂದಡಿಯಿಡುತ್ತಿರುವೆ.....
-ಎಸ್ .ಪಿ. ವಿಜಯಲಕ್ಷ್ಮಿ
ನನ್ನೀ ಕವಿತೆಯೊಂದಿಗೆ ಎಲ್ಲರಿಗೂ ಹಬ್ಬದ ಶುಭ ಹಾರೈಸುತ್ತ ಬ್ಲಾಗ್ ನಲ್ಲಿ ಮುಂದಡಿಯಿಡುತ್ತಿರುವೆ.....
-ಎಸ್ .ಪಿ. ವಿಜಯಲಕ್ಷ್ಮಿ
-
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ